Latest News

ಮೈಸೂರಿನಲ್ಲಿ ಜನಪರ ರಾಜಕೀಯ ಸಮಾವೇಶ

Mysore Political Conference
ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮೈಸೂರು ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ಇಲ್ಲಿನ ಲಿಡ್ಕರ್ ಮೈದಾನದಲ್ಲಿ ರಾಜಕೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಪಿ.ಎಸ್.ದ್ವಾರಕ್‌ನಾಥ್, ಹಲವರು ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಸಂದಸದರಾಗಿ, ಶಾಸಕಾರಿಗ ಮತ್ತು ವಿವಿಧ ಸರಕಾರಿ ಹುದ್ದೆಗಳಲ್ಲಿ ಅಧಿಕಾರಿಗಳಾಗಿರುವುದು ನಿಜ.

ಶೋಷಿತ ಸಮುದಾಯಗಳ ವಿಮೋಚನೆಗಾಗಿ ಎಸ್‌ಡಿಪಿಐ : ಇ.ಅಬೂಬಕ್ಕರ್

ಮಂಗಳೂರು:   ಭಾರತವು ಇಂದು ಅಪಾಯಕಾರಿ ಸ್ಥಿತಿಯತ್ತ ವಾಲುತ್ತಿದೆ. ಭಾರತದ ವಿದೇಶಾಂಗ ನೀತಿಯು ಅಮೆರಿಕದ ಆದೇಶ ಮೇರೆಗೂ ಇಸ್ರೇಲ್‌ಗೆ ಅನುಕೂಲಕರಕವಾಗಿಯೂ ರೂಪುಗೊಳ್ಳುತ್ತಿದೆ. ಬೆಂಗಳೂರಿನ ಅರ್ಧದಷ್ಟು ಜನಸಂಖ್ಯೆ ಇಲ್ಲದ ಇಸ್ರೇಲ್ ಎಂಬ ರಾಷ್ಟ್ರದ ರಾಯಭಾರಿ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಅಗತ್ಯವಾದರೂ ಏನು? ಸೌದಿಅರೇಬಿಯದಲ್ಲಿ ಭಾರೀ ಸಂಖ್ಯೆಯಲ್ಲಿ  ಭಾರತೀಯರು ಉದ್ಯೋಗದಲ್ಲಿದ್ದಾರೆ. ಆದರೆ ದೇಶದಲ್ಲಿ ಸೌದಿ ರಾಯಭಾರ ಕಚೇರಿ ಇರುವುದು ಮುಂಬೈಯಲ್ಲಿ ಮಾತ್ರ. ಇಸ್ರೇಲ್ ಎಂಬುದು ಜನರು ಉದ್ಯೋಗವನ್ನರಸಿ ಹೋಗಲು ಸಾಧ್ಯ ಇರುವಂತಹ ರಾಷ್ಟ್ರವಲ್ಲ. ಆದರೂ ಭಾರತ ಯಾಕೆ ಅಂತಹ ದೇಶದೊಂದಿಗೆ ಸಂಬಂಧ ಬೆಳೆಸುತ್ತಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕ್ಕರ್  ತಿಳಿಸಿದರು.

ಬೆಂಗಳೂರು: ಎಸ್‌ಡಿಪಿಐಯಿಂದ ಸ್ನೇಹ ಸಮ್ಮಿಲನ

Get together
ಬೆಂಗಳೂರು:  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಫೆ.18ರಂದು ಇಲ್ಲಿನ ಬೆನ್‌ಸನ್ ಟೌನ್‌ನ ಆ್ಯಡಮ್ಸ್ ಗೋಲ್ಡನ್ ಹೆರಿಟೇಜ್‌ನಲ್ಲಿ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಹ್ಮೂದ್ ಶರೀಫ್ ಆವಾದ್, ಎಸ್‌ಡಿಪಿಐ ಕೇವಲ ಎರಡೂವರೆ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಪಕ್ಷವಾಗಿದ್ದರೂ, ಕನ್ಯಾಕುಮಾರಿಯಿಂದ ದೂರದ ಮಣಿಪುರದವರೆಗೆ ಎಲ್ಲಾ ಮೂಲೆ ಮೂಲೆಗಳನ್ನು ತಲುಪಿದ್ದು, ಇದು ಪಕ್ಷವನ್ನು ಜನರು ಸ್ವೀಕರಿಸುತ್ತಿದ್ದಾರೆ ಎನ್ನುವುದಕ್ಕೆ ಪುರವಾಗಿದೆ ಎಂದರು.
ಪಕ್ಷವು ತಮಿಳುನಾಡಿನ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 300 ಸೀಟುಗಳಿಗೆ ಸ್ಪರ್ಧಿಸಿದ್ದು, 66 ಸೀಟುಗಳನ್ನು ಗೆದ್ದುಕೊಂಡಿದೆ

News

ಉಳ್ಳಾಲ: ಉಳ್ಳಾಲ ಪುರಸಬೆ ವತಿಯಿಂದ ತೊಕ್ಕೋಟಿನ ರೋಯಲ್ ಆಡಿಟೋರಿಯಂ ಹಾಲ್‌ನಲ್ಲಿ ಎ.27ರಂದ ಎಸ್ ಡಿ ಪಿ ಐ ಕಾರ್ಯಕರ್ತರ...
ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮೈಸೂರು ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ಇಲ್ಲಿನ ಲಿಡ್ಕರ್...
ಬೆಂಗಳೂರು: ಮುಖ್ಯಮಂತ್ರಿ ಸದಾನಂದ ಗೌಡ ಮಂಡಿಸಿದ ಬಜೆಟ್ ಅಭಿವೃದ್ದಿಗೆ ಪೂರಕವಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ...
ಮಂಗಳೂರು:   ಭಾರತವು ಇಂದು ಅಪಾಯಕಾರಿ ಸ್ಥಿತಿಯತ್ತ ವಾಲುತ್ತಿದೆ. ಭಾರತದ ವಿದೇಶಾಂಗ ನೀತಿಯು ಅಮೆರಿಕದ ಆದೇಶ ಮೇರೆಗೂ...
ಬೆಳಗಾವಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ವಡ್ಗಾಂವ್ ಸಮಿತಿ ಹಾಗೂ ವಡ್ಗಾಂವ್ ಜಮಾಅತ್‌ನ ಜಂಟಿ...
ಬೆಂಗಳೂರು:  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಫೆ.18ರಂದು ಇಲ್ಲಿನ...
ಬೆಂಗಳೂರು:  ರಾಜ್ಯದ್ಯಂತ ನಡೆಸಲುದ್ದೇಶಿಸಿರುವ ‘ಜನ ಪರ ರಾಜಕೀಯ ಸಮಾವೇಶ’ದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ...
ಪಾವೂರು: ಎಸ್‌ಡಿಪಿಐ ವತಿಯಿಂದ ಪಾವೂರು ಗ್ರಾಮ ಪಂಚಾಯತಿಗೊಳಪಟ್ಟ ಪ್ರದೇಶದಲ್ಲಿ ಹದಗೆಟ್ಟ ದಾರಿದೀಪಗಳನ್ನು ತೆರವುಗೊಳಿಸಿ...
ಪಾವೂರು: ಎಸ್‌ಡಿಪಿಐ ವತಿಯಿಂದ ಪಾವೂರು ಗ್ರಾಮ ಪಂಚಾಯತಿಗೊಳಪಟ್ಟ ಪ್ರದೇಶದಲ್ಲಿ ಹದಗೆಟ್ಟ ದಾರಿದೀಪಗಳ ಸ್ಥಳದಲ್ಲಿ ಹೊಸ...